ಮುಕ್ತಾಯ ಮಾಡು

    ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸೂರಜ್ ಗೋವಿಂದರಾಜ್

    ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸೂರಜ್ ಗೋವಿಂದರಾಜ್
    • ಹುದ್ದೆ: ನ್ಯಾಯಾಧೀಶರು, ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಲಘು ವ್ಯಾಜ್ಯಗಳ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶರು

    ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸೂರಜ್ ಗೋವಿಂದರಾಜ್ ರವರು ಮೇ 14, 1973ರಂದು ಜನಿಸಿದ್ದು, ಎನ್‌ಎಲ್‌ಎಸ್‌ಐಯುನಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. ಜೂನ್ 23, 1995 ರಂದು ವಕೀಲರಾಗಿ ವೃತ್ತಿ ಆರಂಭಿಸಿದ ಶ್ರೀಯುತರು ಸಿವಿಲ್, ವಾಣಿಜ್ಯ ವ್ಯಾಜ್ಯಗಳು, ಒಪ್ಪಂದಗಳು, ಆಸ್ತಿ ಕಾನೂನು, ಮಧ್ಯಸ್ಥಿಕೆ, ಕಂಪನಿ ಕಾನೂನು, ಬೌದ್ಧಿಕ ಆಸ್ತಿ ಹಕ್ಕುಗಳು, ಸಂವಿಧಾನದ ವಿಷಯಗಳು, ಸಾಲ ವಸೂಲಾತಿ, ಪರಿಸರ ಕಾನೂನು, ಸ್ಥಳೀಯ ಭೂ ಕಾನೂನುಗಳ ಅಡಿಯಲ್ಲಿ ಆದಾಯ ವಿಷಯಗಳು, ಗ್ರಾಹಕ ಕಾನೂನು, RERA ಇತ್ಯಾದಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.‍ ಶ್ರೀಯುತರು ಸೆಪ್ಟೆಂಬರ್ 23, 2019ರಂದು ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡು, ಮಾರ್ಚ್ 1, 2021ರಂದು ಕರ್ನಾಟಕ ಉಚ್ಛ ನ್ಯಾಯಾಲಯದ ಖಾಯಂ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.