ಜಿಲ್ಲಾ ನ್ಯಾಯಾಲಯದ ಬಗ್ಗೆ
ನಗರ ಸಿವಿಲ್ ನ್ಯಾಯಾಲಯದ ಸಂಕ್ಷಿಪ್ತ ಪರಿಚಯ
ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯವು 19.11.1980ರಂದು ಸ್ಧಾಪನೆಗೊಂಡಿದ್ದು, ಅಂದಿನ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀ ವೈ.ವಿ. ಚಂದ್ರಚೂಡರವರಿಂದ ಉದ್ಘಾಟನೆಗೊಂಡಿದ್ದು, ಅಂದಿನ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀಯುತ ಎಂ.ಎನ್.ವೆಂಕಟಾಚಲಯ್ಯ ಹಾಗೂ ಅಂದಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಗೌರವಾನ್ವಿತ ಆರ್. ಗುಂಡೂರಾಯರ ಉಪಸ್ಧಿತಿಯಲ್ಲಿ ಆರಂಭಗೊಂಡಿತ್ತು.
ಈ ಹಿಂದೆ ಬೆಂಗಳೂರು ನಗರದಲ್ಲಿ, ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಂತೆ, ಮುನ್ಸೀಫ್ ನ್ಯಾಯಾಲಯ, ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದವು, ಬೆಳೆಯುತ್ತಿರುವ ಬೆಂಗಳೂರಿನ ಬೆಳವಣಿಗೆಯನ್ನು ಮತ್ತು ದಾಖಲಾಗುತ್ತಿದ್ದ ಮೊಕದ್ದಮೆಗಳ ಏರುಗತಿಯನ್ನು ಅರಿತು ಮತ್ತು ಆಗ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಾಲಯಗಳಿಂದ ನಿರೀಕ್ಷಿತ ಉದ್ದೇಶ ಸಾಧ್ಯವಿಲ್ಲವೆಂದು ಮನಗಂಡು, ಅಲ್ಲದೇ ನ್ಯಾಯಾಲಯಗಳ ತೀರ್ಪಿಗೆ ಮೇಲ್ಮನವಿಗಳನ್ನು, ವಿವಿಧ ಸ್ತರದ ಉನ್ನತ ನ್ಯಾಯಾಲಯಗಳಿಗೆ ಸಲ್ಲಿಸಬೇಕಾದ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ, ಮೇಲಸ್ತರದ ನ್ಯಾಯಾಧೀಶರು ಕಾರ್ಯನಿರ್ವಹಿಸುವ ಮತ್ತು ಅವರುಗಳಿಂದ ಬರುವ ತೀರ್ಪು ಗುಣಮಟ್ಟದಿಂದ ಕೂಡಿರಬೇಕು, ಕಕ್ಷಿದಾರರು ಅವುಗಳಿಂದ ತೃಪ್ತರಾಗಬೇಕೆಂಬ ಸದುದ್ದೇಶದಿಂದ, ಮತ್ತು ಸಲ್ಲಿಸಲಾಗುವ ಮೇಲ್ಮನವಿಗಳ ಸಂಖ್ಯೆ ಇದರಿಂದ ಕಡಿಮೆಯಾಗಬಹುದೆಂಬ ಉದ್ದೇಶದಿಂದ, ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯ, ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಬಾಂಬೆ, ಹಾಗೂ ಅಹಮದಾಬಾದ್ನ ನಗರ ಸಿವಿಲ್ ನ್ಯಾಯಾಲಯಗಳನ್ನು ಸಂದರ್ಶಿಸಿ, ಅವುಗಳ ಕಾರ್ಯನಿರ್ವಹಣೆಯ ಬಗ್ಗೆ ಅಧ್ಯಯನ ಕೈಗೊಂಡು, ವಿವರವಾದ ವರದಿಯನ್ನು ನೀಡಲು ಉನ್ನತ ಮಟ್ಟದ ನ್ಯಾಯಾಂಗ ಅಧಿಕಾರಿಗಳನ್ನು ಆ ನಗರಗಳಿಗೆ ನಿಯೋಜನೆ ಮಾಡಿ, ಅವರು ನೀಡಿದ ವರದಿಗಳನ್ನು ಆಧರಿಸಿ, ವ್ಯವಸ್ಥೆಯ ಅಳವಡಿಕೆಯ ಸಾಧಕ ಭಾದಕಗಳನ್ನು ಚರ್ಚಿಸಿ, ವಿಮರ್ಶಿಸಿ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಸ್ಧಾಪನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು.
ಅದರಂತೆ, ಕರ್ನಾಟಕ ರಾಜ್ಯ ಸರ್ಕಾರ ನಗರ ಸಿವಿಲ್ ನ್ಯಾಯಾಲಯ ಕಾಯ್ದೆ, 1979ನ್ನು ಜಾರಿಗೊಳಿಸಿದ್ದು, ಸದರಿ ಆದೇಶ ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ 17ನೇ ಏಪ್ರಿಲ್ 1980ರಂದು ಪ್ರಕಟಗೊಂಡು, ಸರ್ಕಾರದ ಅಧಿಸೂಚನೆ ಸಂಖ್ಯೆ ಲಾ-263 ಎಲ್ಸಿಇ ದಿನಾಂಕ 05.11.1980ರಂತೆ ನಗರ ಸಿವಿಲ್ ನ್ಯಾಯಾಲಯ ಸ್ಧಾಪನೆಗೊಂಡು, ದಿನಾಂಕ 17.11.1980ರಿಂದ ಶುಭ ಕಾರ್ಯರಂಭ ಮಾಡಿತ್ತು. ಶ್ರೀಯುತ ಪಿ.ಎ. ಕುಲಕರ್ಣಿ ಹಿರಿಯ ಜಿಲ್ಲಾ ನ್ಯಾಯಾಧೀಶರನ್ನು, ಪ್ರಥಮ ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿತ್ತು, ಶ್ರೀಯುತರು ಮುಂದೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು.
ಕಾರ್ಯಾರಂಭದ ಪ್ರಾರಂಭದಲ್ಲಿ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ವರ್ಗಗಳ ಮೊಕದ್ದಮೆಗಳ ಸಂಖ್ಯೆ 31,772. ಆರಂಭದಲ್ಲಿ ಹಿರಿಯ ಶ್ರೇಣಿಯ ಜಿಲ್ಲಾ ನ್ಯಾಯಾಧೀಶರನ್ನು ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರನ್ನಾಗಿಯೂ ಜೊತೆಗೆ ಉಳಿದ 18 ಅಪರ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದ್ದು, ಅಂದು ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಸಂಖ್ಯೆ ಕೇವಲ 391. ತದನಂತರದ ಬೆಳವಣಿಗೆಯಲ್ಲಿ ಮೊಕದ್ದಮೆಗಳ ದಾಖಲಾತಿಯಲ್ಲಾದ ಏರಿಕೆಗೆ ಅನುಗುಣವಾಗಿ, ಕಾಲ ಕಾಲಕ್ಕೆ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯಗಳನ್ನು ಸ್ಧಾಪಿಸಿ, ನ್ಯಾಯಾಲಯಗಳ ಸಂಖ್ಯೆಗೆ ಅನುಗುಣವಾಗಿ ವಿವಿಧ ಶ್ರೇಣಿಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಹಾಲಿ ನಗರ ಸಿವಿಲ್ ನ್ಯಾಯಾಲಯ ಬೆಂಗಳೂರಿನಲ್ಲಿ, ಪ್ರಧಾನ ನಗರ ಸಿವಿಲ್ ನ್ಯಾಯಾಧೀಶರನ್ನು ಒಳಗೊಂಡಂತೆ, ಒಟ್ಟು 95 ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.
ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳ ಸಂಕ್ಷಿಪ್ತ ಪರಿಚಯ
ದಿನಾಂಕ 07.04.1970 ರಂದು ಅಂದಿನ ಮೈಸೂರು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಗೌರವಾನ್ವಿತ ಎಂ. ಸದಾಶಿವಯ್ಯ ಹಾಗೂ ಅಂದಿನ ಮೈಸೂರು ಸರ್ಕಾರದ ಕಾನೂನು ಸಚಿವರ ಸಮ್ಮುಖದಲ್ಲಿ ಬೆಂಗಳೂರು ನಗರದ ನೃಪತುಂಗ ರಸ್ತೆಯ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದ ಮುಖ್ಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿರುತ್ತಾರೆ. ದಿನಾಂಕಃ 09.03.1977ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಕೆ. ಭೀಮಯ್ಯರವರ ಸಮ್ಮುಖದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಸಿ. ಹೊನ್ನಯ್ಯರವರು ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದ ಕಟ್ಟಡವನ್ನು ಉದ್ಫಾಟನೆ ಮಾಡಿರುತ್ತಾರೆ.
ಮುುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳ ಸಂಕೀರ್ಣದ ಪೂರ್ವ ದಿಕ್ಕಿಗೆ ಇರುವ ಪೂರಕ ಕಟ್ಟಡದ ಶಂಕುಸ್ಥಾಪನಾ ಸಮಾರಂಭವು ದಿನಾಂಕಃ 06.10.2005 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೆ. ರಾಮಣ್ಣರವರ ಉಪಸ್ಥಿತಿಯಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಎಸ್.ಆರ್. ನಾಯಕ್ ರವರಿಂದ ನೆರವೇರಿಸಲ್ಪಟ್ಟಿತ್ತು. ಸದರಿ ಕಟ್ಟಡವು ಪೂರ್ಣಗೊಂಡ ನಂತರ ದಿನಾಂಕಃ 29.10.2007 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ರವಿ ಬಿ. ನಾಯಕ್, ಶ್ರೀ ಸುಭಾಷ್ ಬಿ. ಆದಿ, ಇವರುಗಳ ಘನ ಉಪಸ್ಥಿತಿಯಲ್ಲಿ ಅಂದಿನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಸಿರಿಯಾಕ್ ಜೋಸೆಫ್ರವರಿಂದ ಉದ್ಫಾಟನೆಗೊಂಡಿರುತ್ತದೆ.
ಮುುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದ ಸಂಕೀರ್ಣದ ಹೆಚ್ಚುವರಿ ಪೂರಕ ಕಟ್ಟಡದ ಉದ್ಛಾಟನಾ ಸಮಾರಂಭ ಹಾಗೂ 2ನೇ ಹಂತದ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವು ದಿನಾಂಕಃ 09.09.2019ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಮೋಹನ ಎಂ. ಶಾಂತನಗೌಡರ್, ಶ್ರೀ ಎಸ್. ಅಬ್ದುಲ್ ನಜೀರ್, ಶ್ರೀ ಎ.ಎಸ್. ಬೋಪಣ್ಣರವರಿಂದ ನೆರವೇರಿಸಲ್ಪಟ್ಟಿತ್ತು.[...]
ಮತ್ತಷ್ಟು ಓದು- ಜಿಲ್ಲಾ ಪ್ರಕರಣ ನಿರ್ವಹಣಾ ಸಮಿತಿ ರಚನೆಯ ಕುರಿತು ಅಧಿಸೂಚನೆ
- ಕರ್ನಾಟಕ ಲೋಕಸೇವಾ ಆಯೋಗದಿಂದ 2005ರ ಸಹಾಯಕರು/ಪ್ರಥಮ ದರ್ಜೆ ಸಹಾಯಕರ ನೇಮಕಾತಿಗೆ ಸಂಬಂಧಿಸಿದಂತೆ 29.02.2008ರ ಅಂತಿಮ ಹೆಚ್ಚುವರಿ ಆಯ್ಕೆಪಟ್ಟಿ ಅಧಿಸೂಚನೆಯನ್ವಯ ನಗರ ಸಿವಿಲ್ ನ್ಯಾಯಾಲಯಕ್ಕೆ ಹಂಚಿಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ.
- ಬೆಂಗಳೂರು ನಗರದ ಸಿ.ಎಂ.ಎಂ ಮತ್ತು ಎ.ಸಿ.ಎಂ.ಎಂ ನ್ಯಾಯಾಲುಗಳಿಗೆ ಪೋಲೀಸ್ ಠಾಣೆಗಳ ಪ್ರಾದೇಶಿಕ ನ್ಯಾಯವ್ಯಾಪ್ತಿಯ ಮರುವಿಂಗಡಣೆ ಕುರಿತಾದ ಅಧಿಸೂಚನೆ
- ಕರ್ನಾಟಕ ಲೋಕಸೇವಾ ಆಯೋಗದಿಂದ 2005ರ ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಸಂಬಂಧಿಸಿದ ಹೆಚ್ಚುವರಿ ಆಯ್ಕೆಪಟ್ಟಿ ಅಧಿಸೂಚನೆ ದಿನಾಂಕ 05.09.2008.
- ಕರ್ನಾಟಕ ಲೋಕಸೇವಾ ಆಯೋಗದಿಂದ 2005ರ ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಸಂಬಂಧಿಸಿದ ಅಂತಿಮ ಆಯ್ಕೆಪಟ್ಟಿ ಅಧಿಸೂಚನೆ ದಿನಾಂಕ 23.02.2007.
- ಕರ್ನಾಟಕ ಲೋಕಸೇವಾ ಆಯೋಗದಿಂದ 2005ರ ಸಹಾಯಕರು/ಪ್ರಥಮ ದರ್ಜೆ ಸಹಾಯಕರ ನೇಮಕಾತಿಗೆ ಸಂಬಂಧಿಸಿದಂತೆ 14.07.2006ರ ಆಯ್ಕೆಪಟ್ಟಿ ಅಧಿಸೂಚನೆಯನ್ವಯ ನಗರ ಸಿವಿಲ್ ನ್ಯಾಯಾಲಯಕ್ಕೆ ಹಂಚಿಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ ದಿನಾಂಕ 18.07.2006.
- ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಲು ಅಭಿಮತವನ್ನು ಸಲ್ಲಿಸುವ ಕುರಿತಾದ ಸುತ್ತೋಲೆ ದಿನಾಂಕ 26.02.2024.
- ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯದಲ್ಲಿನ ಬೆರಳಚ್ಚುಗಾರರು/ನಕಲು-ಬೆರಳಚ್ಚುಗಾರರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಆಯ್ಕೆಪಟ್ಟಿ ಅಧಿಸೂಚನೆ ದಿನಾಂಕ 20.07.2006.
- ಕರ್ನಾಟಕ ಉಚ್ಛ ನ್ಯಾಯಾಲಯದ ಸುತ್ತೋಲೆ ಸಂಖ್ಯೆ ಎಲ್.ಆರ್.ಸಿ 09/ಕೌನ್ಸಿಲ್ ಮೀಟಿಂಗ್/2015 ದಿನಾಂಕ 24.02.2024 ಇ-ಐಎಲ್ಆರ್ ಕರ್ನಾಟಕ ಸರಣಿಯನ್ನು ಪ್ರಾರಂಭಿಸಿರುವ ಬಗ್ಗೆ
- ಲಘು ವ್ಯವಹಾರಗಳ ನ್ಯಾಯಾಯದಲ್ಲಿ 31.12.2023ಕ್ಕೆ ಅನ್ವಯವಾಗುವಂತೆ ವಿವಿಧ ವೃಂದಗಳಲ್ಲಿನ ನೌಕರರ ಜೇಷ್ಠತಾ ಪಟ್ಟಿ
- ಸರ್ವೋಚ್ಚ ನ್ಯಾಯಾಲಯದ ಕ್ರಿಮಿನಲ್ ಅಪೀಲ್ ಸಂಖ್ಯೆ 730/2020 ದಿನಾಂಕ 04.11.2020 ರಲ್ಲಿನ ಆದೇಶಗಳು
- ನಗರ ಸಿವಿಲ್ ನ್ಯಾಯಾಲಯದ ಘಟಕದ ವಿವಿಧ ವೃಂದದ ಕರಡು ಜೇಷ್ಠತಾ ಪಟ್ಟಿ ಎಸ್ ಡಿ ಎ , ಟೈಪಿಸ್ಟ್ಗಳು, ಟೈಪಿಸ್ಟ್-ನಕಲುದಾರರು 01.08.2022 ರಂತೆ
- 01.08.2022 ರಂತೆ ಸ್ಟೆನೋಗ್ರಾಫರ್ಗಳ ಕರಡು ಹಿರಿತನ ಪಟ್ಟಿ
- 371-ಜೆ ಸ್ಥಳೀಯ ಕೇಡರ್ನಲ್ಲಿ (ಹೈದರಾಬಾದ್-ಕರ್ನಾಟಕ ಪ್ರದೇಶ) ನಗರ ಸಿವಿಲ್ ನ್ಯಾಯಾಲಯದ ಘಟಕದಲ್ಲಿ ವಿವಿಧ ಕೇಡರ್ಗಳ ಜೇಷ್ಠತಾ ಪಟ್ಟಿ.
- ನಗರ ಸಿವಿಲ್ ನ್ಯಾಯಾಲಯದ ಘಟಕದಲ್ಲಿ ಎಫ್ ಡಿ ಎ/ಬೆಂಚ್ ಕ್ಲರ್ಕ್ ಗ್ರೇಡ್ III ರ ಕರಡು ಹಿರಿತನ ಪಟ್ಟಿ 01/08/2022 ರಂತೆ
- ನಗರ ಸಿವಿಲ್ ನ್ಯಾಯಾಲಯದ ಘಟಕದಲ್ಲಿ ಸ್ಟೆನೋಗ್ರಾಫರ್ ಗ್ರೇಡ್-II ರ ಕರಡು ಹಿರಿತನ ಪಟ್ಟಿ 01/08/2022 ರಂತೆ
ಯಾವುದೇ ಪೋಸ್ಟ್ ಕಂಡುಬಂದಿಲ್ಲ.
ಇಕೋರ್ಟ್ ಸೇವೆಗಳು
ಪ್ರಕರಣದ ಸ್ಥಿತಿ
ಪ್ರಕರಣದ ಸ್ಥಿತಿ
ನ್ಯಾಯಾಲಯದ ಆದೇಶ
ನ್ಯಾಯಾಲಯದ ಆದೇಶ
ವ್ಯಾಜ್ಯಗಳ ಪಟ್ಟಿ
ವ್ಯಾಜ್ಯಗಳ ಪಟ್ಟಿ
ಕೇವಿಯೇಟ್ ಹುಡುಕಾಟ
ಕೇವಿಯೇಟ್ ಹುಡುಕಾಟ
ಇತ್ತೀಚಿನ ಪ್ರಕಟಣೆಗಳು
- ಜಿಲ್ಲಾ ಪ್ರಕರಣ ನಿರ್ವಹಣಾ ಸಮಿತಿ ರಚನೆಯ ಕುರಿತು ಅಧಿಸೂಚನೆ
- ಲಘು ವ್ಯವಹಾರಗಳ ನ್ಯಾಯಾಲಯದ ಹೊಸ ಪ್ರಕರಣ, ವಿಲೇವಾರಿ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ಅಂಕಿ ಅಂಶಗಳು ಮಾರ್ಚ್-2024
- ಲಘು ವ್ಯವಹಾರಗಳ ನ್ಯಾಯಾಲಯದ ಹೊಸ ಪ್ರಕರಣ, ವಿಲೇವಾರಿ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ಅಂಕಿ ಅಂಶಗಳು ಫೆಬ್ರವರಿ-2024
- ನಗರ ಸಿವಿಲ್ ನ್ಯಾಯಾಲಯದ ಹೊಸ ಪ್ರಕರಣ, ವಿಲೇವಾರಿ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ಅಂಕಿ ಅಂಶಗಳು ಮಾರ್ಚ್-2024
- Justis ಮೊಬೈಲ್ ಅಪ್ಲಿಕೇಶನ್ 2.0 ಬಳಕೆದಾರರ ಕೈಪಿಡಿ